ರಾಖಿ ಭೈ ರಾಹುಲ್ ಟೋನ್ಸೆ, ಈ ಹೆಸರು ಕಳೆದ ಒಂದು ವರ್ಷದ ಹಿಂದೆ ಎಲ್ಲರಿಗೂ ಚಿರಪರಿಚಿತ.. ಆತ ಏನೋ ಮಹಾನ್
ಸಾಧನೆ ಮಾಡಿ, ಜನರನ್ನು ಉದ್ಧಾರ ಮಾಡಿ ಈ ಹೆಸರು ಗಳಿಸಿಲ್ಲ.. ಬದಲಾಗಿ ಡ್ರಗ್ಸ್ ಕೇಸಿನಲ್ಲಿ
ಕುಖ್ಯಾತಿಯನ್ನು ಪಡೆದು 6 ತಿಂಗಳು ಜೈಲಿನಲ್ಲಿ ಮುದ್ದೆ ಮುರಿದದ್ದೇ ಈತನ ಸಾಧನೆ.. ಈತ ಯಾರು ಅಂತ
ನಿಮಗೆ ಮತ್ತೊಮ್ಮೆ ನೆನಪಿಸಿ ಬಿಡ್ತೇನೆ.. ಸ್ಯಾಂಡಲ್ವುಡ್ ಡ್ರಗ್ ಕೇಸಲ್ಲಿ 12ನೇ ಆರೋಪಿ ಈ
ರಾಹುಲ್ ಟೋನ್ಸೆ.. ನಮ್ಮವರೇ ನಮಗೆ ಹೇಗೆ ಮುಳುವಾಗ್ತಾರೆ ಅನ್ನೋದಕ್ಕೆ ಈ ರಾಹುಲ್ ಬೆಸ್ಟ್
ಎಕ್ಸಾಂಪಲ್.. ಈಗ ಈ ರಾಹುಲ್ ಟೋನ್ಸೆ ಯಿಂದ ನಟಿ ಸಂಜನಾ ಗಲ್ರಾನಿ ಬರ್ಬಾದ್ ಆಗಿದ್ದಾರೆ ಅನ್ನೋದು
ಅಷ್ಟೇ ಸತ್ಯ.. ಸಂಜನಾ ಗಲ್ರಾನಿಗೆ ಈತ ಸಹೋದರ ಈತನನ್ನು ರಾಖಿ ಭಾಯ್ ಅಂತಲೇ ಸಂಜನಾ ಪ್ರೀತಿ ಯಿಂದ
ತನ್ನ ಸಹೋದರನಂತೆ ನೋಡ್ತಾರೆ.. ಆದ್ರೆ ಅದೇ ಸಂಜನಾಗೆ ಈಗ ಈತ ಗೂಟ ಇಟ್ಟಿದ್ದಾನೆ.. ಈತನ ಸಹವಾಸ
ದೋಶದಿಂದ ನಟಿ ಸಂಜನಾ ಜೈಲು ಸೇರಿದ್ದೂ ಆಯ್ತು.. ತಾನು ಗಳಿಸಿದ ಹಣವನ್ನು ಕೋರ್ಟು, ಕಚೇರಿಗೆ
ಸುರಿಯುತ್ತಿದ್ದಾರೆ ನಟಿ ಸಂಜನಾ.. ಈಗ ಸಂಜನಾಗೆ ಸಿನಿಮಾಗಳಿಗಿಂತ ಕೋರ್ಟು, ಕಚೇರಿಗೆ ಅಲೆಯೋದೆ
ಕೆಲಸ ವಾಗಿದೆ.. ಸಿನಿಮಾಗಳ ಆಫರ್ ಕೂಡ ಅಷ್ಟಕ್ಕಷ್ಟೇ.. ಈತ ಹಾಳಾಗಿದ್ದಲ್ಲದೇ ಸಂಜನಾರನ್ನೂ ಹಾಳು
ಮಾಡಿದ್ದು ಅಷ್ಟೇ ಸತ್ಯ.. ಹಾಗೂ ನಾಶ ಮಾಡಿದ್ದೂ ಕೂಡ ಸತ್ಯ.. ಒಬ್ಬ ವ್ಯಕ್ತಿಯನ್ನು ನಂಬಿ ಹೇಗೆ
ಹಾಳಾಗಬಹುದು ಅನ್ನೋಕೆ ಈ ರಾಹುಲ್ ಟೋನ್ಸೆಯೇ ಗುರು ಅಂತ ಹೇಳಿದ್ರೂ ತಪ್ಪಾಗಲ್ಲ..ಈತನ ನಂಬಿದ ನಟಿ
ಸಂಜನಾ ಕೂಡ ಡ್ರಗ್ಸ್ ಕೇಸಲ್ಲಿ 14ನೇ ಆರೋಪಿಯಾದ್ರು.. ಅವರ ಈಗಿನ ಸ್ಥಿತಿ ನೋಡಿ ನಗವುದೋ ಅಳುವುದೋ
ಗೊತ್ತಾಗಲ್ಲ.. ಅಂತಹ ಪರಿಸ್ಥಿತಿ ಗೆ ಅವರೇ ಕಾರಣವಾದ್ರೋ ಏನೋ, ಆದರೆ ಒಬ್ಬ ವ್ಯಕ್ತಿ ಎಷ್ಟರ
ಮಟ್ಟಿಗೆ ಒಂದು ಜೀವನ ಹಾಳ್ ಮಾಡ್ತಾನೆ ಅನ್ನೋಕೆ ಈ ಪ್ರಕರಣ ಬೆಸ್ಟ್ ಎಕ್ಸಾಂಪಲ್.. ಈಗ ಈ ರಾಹುಲ್
ಮೇಲೆ ಪಿಸಿಆರ್ ಆಗಿದೆ.. 40 ದಿನವಾದ್ರೂ ಆಸಾಮಿ ಪತ್ತೆಯೇ ಇಲ್ಲ.. ಈಗ ಮತ್ತೆ ಈ ರಾಹುಲ್ ಟೋನ್ಸೆ
ಸುದ್ದಿಯಾಗಿದ್ದಾನೆ.. ಅದಕ್ಕೆ ಕಾರಣ ನಟಿ ಸಂಜನಾ ಗಲ್ರಾನಿ ನೀಡಿರುವ ದೂರು.. ಹೌದು ಈ ರಾಹುಲ್
ಟೋನ್ಸೆ ದೋ ನಂಬರ್ ದಂಧೆ ಮಾಡಿ ನಟಿ ಸಂಜನಾ ಗಲ್ರಾನಿಗೂ ಪಂಗನಾಮ ಹಾಕಿದ್ದಾನಂತೆ.. ತನ್ನ ಸ್ವಂತ
ಸಹೋದರಿ ದುಬೈನಲ್ಲಿದ್ದಾಗ ಸಂಜನಾ ಬಳಿ ಬಂದು ಗೋಳಾಡಿದ ರಾಹುಲ್ ಟೋನ್ಸೆ, ತನ್ನ ಬ್ಯುಸಿನೆಸ್
ಆರಂಭಿಸೋದಾಗಿ ಹೇಳಿ ಧನ ಸಹಾಯ ಪಡೆದುಕೊಂಡಿದ್ದನಂತೆ.. ಆದ್ರೆ ಆತನ ಮಾತಿಗೆ ಮರುಳಾದ ನಟಿ ಸಂಜಾನ
ಗಲ್ರಾನಿ ಈತನಿಗೆ ತನ್ನ ಸಹೋದರ ಎಂಬ ಮಾನವೀಯತೆಯ ದೃಷ್ಟಿಯಿಂದ ಆತನಿಗೆ ಸಹಾಯ ಕೂಡ ಮಾಡಿದ್ದಾರೆ..
ಸಂಜನಾ ಗಲ್ರಾನಿ ಸಹಾಯ ಮಾಡಿದ್ದಕ್ಕೆ ಸಾಕಷ್ಟು ದಾಖಲೆಗಳು ಅವರ ಬಳಿ ಇದೆ.. ಈ ರಾಹುಲ್ ತಾನು
ಮಾಡುತ್ತಿರುವ ನಮಕ್ ಹರಾಮ್ ಕೆಲಸ ಯಾರಿಗೂ ಗೊತ್ತಾಗಬಾರದು ಅಂತ ತನ್ನ ತಾಯಿ ರಾಜೇಶ್ವರಿ, ತಂದೆ
ರಾಮಕೃಷ್ಣರ ಕರ್ನಾಟಕ ಬ್ಯಾಂಕ್ ಅಕೌಂಟ್ ಗೆ ಹಣ ಹಾಕಿಸಿಕೊಂಡಿದ್ದಾನೆ.. ಕಳೆದ 2-3 ವರ್ಷಗಳಲ್ಲಿ
ಈತ ಸಹಾಯದ ರೂಪದಲ್ಲಿ ಸಂಜನಾರ ಬಳಿ ಹಣ ಪಡೆದುಕೊಂಡಿದ್ದಾನೆ.. ರಾಹುಲ್ ಪ್ರಾಪರ್ಟೀಸ್ ಅನ್ನೋ
ಜಾಹೀರಾತನ್ನು ಈತ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದಾನೆ.. ಆದ್ರೆ ಮೂಲಗಳ ಪ್ರಕಾರ ಇದು ಅನಧಿಕೃತ
ಅನ್ನೋ ಮಾಹಿತಿ ಇದೆ.. ಯಾವುದೇ ವ್ಯಾವಹಾರಿಕ ಸಂಸ್ಥೆ ಅಥವಾ ಕಂಪನಿ ಆರಂಭಿಸಬೇಕು ಅಂದ್ರೆ ಅದಕ್ಕೆ
ಕೆಲವು ನಿಯಮಗಳಿದೆ.. ರಿಜಿಸ್ಟರ್ ಮಾಡಿಸಿಕೊಂಡು ಅಧಿಕೃತ ವಾಗಿ ವ್ಯವಹಾರ ನಡೆಲು ಅವಕಾಶ ಇದೆ..
ಆದ್ರೆ ಈತ ಯಾವುದೇ ರೀತಿಯ ರೆಜಿಸ್ಟರ್ ಮಾಡಿಕೊಳ್ಳದೆ ತನ್ನದೇ ಹೆಸರಲ್ಲಿ ರಾಹುಲ್ ಪ್ರಾಪರ್ಟೀಸ್
ಮಾಡಿಕೊಂಡಿದ್ದಾನೆ..ಇದಕ್ಕೆ ಅಪ್ಪ, ಅಮ್ಮ ಏನಂದ್ರೆ ಏನೂ ಇಲ್ಲ ಅನ್ನೋ ಆರೋಪ ಕೂಡ ಇದೆ.. ಇದಿಷ್ಟೇ
ಅಲ್ಲದೆ ದೋ ನಂಬರಿ ಕಾರ್ ದಂಧೆ ಕೂಡ ಮಾಡ್ತಿದ್ದಾನೆ.. 2nd ಹ್ಯಾಂಡ್ ಕಾರಿಗೆ ಥಳಕುಬಳಕು ಅನ್ನೋ
ಹಾಗೆ ಪೇಂಟಿಂಗ್ ಮಾಡಿಸಿ ಅದನ್ನು ಮಾರಾಟ ಕೂಡ ಮಾಡ್ತಿದ್ದಾನಂತೆ.. ಅಲ್ಲದೆ ಇದ್ರಲ್ಲಿ ಸಾಕಷ್ಟು
ಜನರಿಗೆ ಮೋಸ ಕೂಡ ಆಗಿದೆಯಂತೆ.. ಇನ್ನೂ ಇದೆಲ್ಲದರಿಂದ ಬೇಸತ್ತ ನಟಿ ಸಂಜನಾ ಗಲ್ರಾನಿ ಈತನ ಬಗ್ಗೆ
ಅನುಮಾನಗೊಂಡು ಇಂದಿರಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಆದ್ರೆ ಇದುವರೆಗೂ ರಾಹುಲ್
ನನ್ನು ಕರೆಸಿ ವಿಚಾರಣೆ ಮಾಡಿಲ್ಲ, ಆತನನ್ನು ವಶಕ್ಕೆ ಪಡೆದಿಲ್ಲ ಅನ್ನೋ ಅಸಮಾಧಾನ ಕೂಡ ಇದೆ..
ಕಳೆದ 40 ದಿನಗಳಿಂದ ಈತನಿಗೆ ಪೊಲೀಸರು ಕರೆದರು ಬಂದು ವಿಚಾರಣೆಗೆ ಹಾಜರಾಗಿಲ್ವಂತೆ.. ಈ ಮಧ್ಯೆ
ತಾನು ಮಾಡಿದ ತಪ್ಪಿಗೆ ತನ್ನ ತಂದೆ ತಾಯಿಗೂ ಕೋರ್ಟ್, ಕಚೇರಿ ಅಲೆಯುವಂತೆ ಮಾಡಿರುವ ಈ ರಾಹುಲ್
ಸದ್ಯ ಕುಟುಂಬ ಸಮೇತವಾಗಿ ಬೇಲ್ ಗಾಗಿ ಅಲೆದಾಡುತ್ತಿದ್ದಾನೆ.. ಕಳ್ಳತನ ಎಲ್ಲಿ ಬಟಾಬಯಲಾಗಿ ಮತ್ತೆ
ಮುದ್ದೆ ಮುರಿಯೋ ಹಾಗೆ ಆಗುತ್ತೋ ಅನ್ನೋ ಭಯದಲ್ಲಿ ಈತ anticipatory bail ಗಾಗಿ
ಪರದಾಡ್ತಿದ್ದಾನೆ.. ಆದ್ರೂ ಈತನ ವಯಸ್ಸಾದ ತಂದೆ, ತಾಯಿ ಮುಖ ನೋಡಿ ಈತನ ಪ್ರಕರಣ ಸುಖಾಂತ್ಯವಾಗಲಿ
ಅಂತ ದೇವರಲ್ಲಿ ಪ್ರಾರ್ಥನೆ ಮಾಡಿ ಪೋಸ್ಟ್ ಹಾಕಿದ್ದೂ ಆಗಿದೆ.. ಈತ ಮಾತ್ರ ಇದುವರೆಗೂ
ತುಟಿಕ್ಪಿಟಿಕ್ ಎಂದಿಲ್ಲ.. ಸಹಜವಾಗೇ ಕಂಪ್ಲೇಟ್ ಆದ್ಮೇಲೆ ಕರೆಸಿ ವಿಚಾರಣೆ ನಡೆಸುವುದು ಖಾಕಿ
ಕರ್ತವ್ಯ ಅದನ್ನು ಅವ್ರು ಮಾಡ್ತಾರೆ ಬಿಡಿ.. ಆದ್ರೆ ಈ ರಾಹುಲ್ ಪೊಲೀಸರ ಕರೆಗೂ ಕ್ಯಾರೆ
ಅನ್ನುತ್ತಿಲ್ಲ ಅಂದ್ರೆ ಈತ ಎಷ್ಟು ಖತರ್ನಾಕ್ ಅಂತ ಲೆಕ್ಕ ಹಾಕಿಕೊಳ್ಳಿ.. ಇಂತಹ ಮಗ ಯಾರಿಗೂ ಬೇಡ
ಶಿವ ಅಂತ ನೀವು ಪ್ರಾರ್ಥನೆ ಮಾಡ್ತಿರಬಹುದು.. ಆದ್ರೆ ನೀವೇನಾದ್ರೂ ನಿಮ್ಮ ಕರಿಯರ್ ಹಾಳ್
ಮಾಡ್ಬೇಕು, ಖ್ಯಾತಿ ಯಿಂದ ಕುಖ್ಯಾತಿಗಳಿಸಬೇಕು ಅಂದ್ರೆ ಒಮ್ಮೆ ಇವನಿಗೆ ಕಾಂಟ್ಯಾಕ್ಟ್ ಮಾಡಿ
ಸಾಕು.. ಒಟ್ನಲ್ಲಿ ಪಾಪ ಅಂತ ಪುಣ್ಯದ್ ಕೆಲ್ಸ ಮಾಡಿದ್ರೆ ಅದು ಪಾಪವಾಗಿ ಪರಿಣಮಿಸಿಬಿಡುತ್ತೆ
ಅಲ್ವಾ!? ಈಗ ಆ ನಟಿ ಮಣಿಗೂ ತಾನು ಕರುಣೆ ತೋರಿಸಿ ಸಹಾಯ ಮಾಡಿದ್ದಕ್ಕೆ ಪಾಪ ಸುತ್ಕೊಂಡು
ಅಲೆದಾಡುವಂತಾಗಿದೆ..
Post a Comment