19 ಕೋಟಿ ಮೌಲ್ಯದ 17.31 ಎ/ಗು ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್

19 ಕೋಟಿ ಮೌಲ್ಯದ 17.31 ಎ/ಗು ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್
    
ಬೆಂಗಳೂರು ನಗರ ಜಿಲ್ಲೆ, ಅ. 22 (ಕರ್ನಾಟಕ ವಾರ್ತೆ) ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಇಂದು ಮಾನ್ಯ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಐದು ತಾಲ್ಲೂಕಗಳಲ್ಲಿ  ಒಟ್ಟು ರೂ 9 ಕೆರೆಗಳಲ್ಲಿ ಒತ್ತುವರಿಯಾದ  9-21.04 ಎ/ಗು  ಜಮೀನಿನ ವಿಸ್ತೀರ್ಣ,  ಬೆಂಗಳೂರು ದಕ್ಷಿಣ,  ಪೂರ್ವ ಮತ್ತು ಆನೇಕಲ್  ತಾಲ್ಲೂಕಿನಗಳಲ್ಲಿ  ಸರ್ಕಾರಿ ಖರಾಬು 1.32 ಎ/ ಗುಂಟೆ ಮತ್ತು ಬೆಂಗಳೂರು ಪೂರ್ವ,  ದಕ್ಷಿಣ ತಾಲ್ಲೂಕುಗಳಲ್ಲಿ ಸರ್ಕಾರಿ ಗೋಮಾಳ 1-9 ಎ/ಗು ಮತ್ತು  ಬೆಂಗಳೂರು  ಪೂರ್ವ, ದಕ್ಷಿಣ ಹಾಗೂ ಯಲಹಂಕ  ತಾಲ್ಲೂಕಿಗಳಲ್ಲಿ ಸರ್ಕಾರಿ ಗುಂಡು ತೋಪು 5-06  ಎ/ಗು, ಆನೇಕಲ್ ತಾಲ್ಲೂಕಿನಲ್ಲಿ ಸರ್ಕಾರಿ ಸ್ಮಶಾನ   0-03 ಗುಂಟೆ  ಸೇರಿದಂತೆ  ರೂ. 19,94,25,000  ಮೌಲ್ಯದ ಒಟ್ಟು 17-31.04 ಎ/ಗು  ವಿಸ್ತೀರ್ಣದ ಗೋಮಾಳ,  ಖರಾಬು,  ಗುಂಡು ತೋಪು, ಸ್ಮಶಾನದ  ‌ಜಮೀನುಗಳನ್ನು ಸರ್ಕಾರದ ವಶಕ್ಕೆ  ವಶಪಡಿಸಿಕೊಳ್ಳಲಾಯಿತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಆಲೂರು ಗ್ರಾಮದ ಸ. ನಂ.132, ರಲ್ಲಿ ಸರ್ಕಾರಿ  0-2 ಎ/ಗು  ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು.

 ಯಲಹಂಕ ತಾಲ್ಲೂಕಿನ ಹೆಸರು ಘಟ್ಟ ಹೋಬಳಿಯ ದಿಬ್ಬೂರು ಗ್ರಾಮದ ಸ.ನಂ 22 ರಲ್ಲಿ ಸರ್ಕಾರಿ  ಕೆರೆ 1.20 ಗುಂಟೆ,  ಜಾಲ-1 ಹೋಬಳಿಯ ಬಿಲ್ಲಮಾರನಹಳ್ಳಿ ಸ.ನಂ 45 ರಲ್ಲಿ  ಗುಂಡು ತೋಪು ೦-೦3 ಎ/ಗು, ಜಾಲ -3 ಹೋಬಳಿಯ ಬಿ.ಕೆ. ಪಾಳ್ಯ ಗ್ರಾಮದ ಸ.ನಂ  32  ರಲ್ಲಿ ಗುಂಡು ತೋಪು  01-05 ಗುಂಟೆ . ಯಲಹಂಕ-1 ಹೋಬಳಿ ಗಂಟೆಗಾನಹಳ್ಳಿ ಗ್ರಾಮದ ಸ.ನಂ.46 ರಲ್ಲಿ ಗುಂಡು ತೋಪು 2.33 ಎ/ಗು, ಒಟ್ಟು 5-21 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ, ಗುಂಡು ತೋಪು, ಜಮೀನನ್ನು ವಶಪಡಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದರು.

ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಣ್ಣೂರು ಗ್ರಾಮದ ಸ.ನಂ.47 ರಲ್ಲಿ ಗುಂಡು ತೋಪು 0.05 ಗು,  ಹಂಚರಹಳ್ಳಿ   ಸ.ನಂ. 31 ಕುಂಟೆ  0.02 ಎ/ಗು,  ಮಂಡೂರು ಗ್ರಾಮದ ಸ.ನಂ 123 ರಲ್ಲಿ  ಕುಂಟೆ 0.04 ಗುಂಟೆ. ವರ್ತೂರು ಹೋಬಳಿಯ, ಚಿಕ್ಕನಾಯಕನಹಳ್ಳಿ ಸ.ನಂ. 36 ರಲ್ಲಿ  ಸರ್ಕಾರಿ ಬೀಳು.0-09 ಗುಂಟೆ. ಒಟ್ಟು 0-20 ಎ/ಗು ವಿಸ್ತೀರ್ಣದ ಸರ್ಕಾರಿ ಗುಂಡು ತೋಪು, ಸರ್ಕಾರಿ ಬೀಳು ಜಮೀನನ್ನು ವಶಪಡಿಸಿಕೊಳ್ಳಲಾಯಿತು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ 
ಹೋಬಳಿಯ ಯಲಚಗುಪ್ಪೆ ಗ್ರಾಮದ ಸ.ನಂ 70 ರಲ್ಲಿ, ಸರ್ಕಾರಿ ಗುಂಡು ತೋಪು  1-00 ಎ/ಗು, ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸ.ನಂ 15 ರಲ್ಲಿ ಸರ್ಕಾರಿ ಕೆರೆ 0-05 ಗುಂಟೆ, ಕೆಂಗೇರಿ ಹೋಬಳಿಯ ತಗಚಗುಪ್ಪೆ. ಸ.ನಂ. 29, ಸರ್ಕಾರಿ ಕಟ್ಟೆ  0-14 ಗುಂಟೆ.  ಉತ್ತರಹಳ್ಳಿ ಹೋಬಳಿಯ ತರಳು ಗ್ರಾಮ ಸ.ನಂ 2 ರಲ್ಲಿ ಸರ್ಕಾರಿ ಕೆರೆ  0-05.08 ಗುಂಟೆ‌ ವಡ್ಡರಪಾಳ್ಯ ಗ್ರಾಮ ಸ.ನಂ 53 ರಲ್ಲಿ ಸರ್ಕಾರಿ ಕೆರೆ 0-26.04 ಗುಂಟೆ.  ತಾವರೆಕೆರೆ ಹೋಬಳಿಯ ಜೋಳನಾಯಕನಹಳ್ಳಿ  ಸ.ನಂ 46  ರಲ್ಲಿ ಗೋಮಾಳ  1-0 ಎ/ಗು ಒಟ್ಟು 3-10.12 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ, ಕಟ್ಟೆ, ಗೋಮಾಳನ ಜಮೀನನ್ನು ವಶಪಡಿಸಿಕೊಳ್ಳಲಾಯಿತು.

ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ತಿಮ್ಮಸಂದ್ರ  ಗ್ರಾಮದ ಸ.ನಂ 19 ರಲ್ಲಿ ಕೆರೆ 00-33 ಎ/ಗು,  ಕರ್ಪೂರ ಗ್ರಾಮದ ಸ.ನಂ 168 ಸನ್ಮಾನ ಸ್ಥಳ 0-03 ಗುಂಟೆ,  
ಅತ್ತಿಬೆಲೆ ಹೋಬಳಿಯ ಕಿತ್ತಗಾನಹಳ್ಳಿ ಗ್ರಾಮದ ಸ.ನಂ 118 ರಲ್ಲಿ ಸರ್ಕಾರಿ  ಕುಂಟೆ   0-02 ಗು, ಅತ್ತಿಬೆಲೆ ಗ್ರಾಮದ ಸ.ನಂ 8 ರಲ್ಲಿ ಪಟಲಾಮ್ಮನ ಕೆರೆ 0.04 ಎ/ಗು,  ಜಿಗಣಿ ಹೋಬಳಿಯ ಲಕ್ಷ್ಮೀಪುರು ಗ್ರಾಮದ ಸ.ನಂ‌ 102 ರಲ್ಲಿ ಕೆರೆ 0-05 ಗುಂಟೆ.  ಮಾರಗೊಂಡಹಳ್ಳಿ ಗ್ರಾಮ ಸ.ನಂ 110 ರಲ್ಲಿ ಸರ್ಕಾರಿ ಕುಂಟೆ 1-10 ಗುಂಟೆ.  ಸರ್ಜಾಪುರ ಹೋಬಳಿಯ ಮುಗುಳೂರು ಗ್ರಾಮ 41 ರಲ್ಲಿ ಸರ್ಕಾರಿ ಕೆರೆ 5-22.08  ಎ/ಗು, ಒಟ್ಟು 07.39.08 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು ಎಂದು ಜಿಲ್ಲಾಧಿಕಾರಿಗಳು  ಅವರು ತಿಳಿಸಿದರು  
ಈ ಕಾರ್ಯಾಚರಣೆಯಲ್ಲಿ  ತಾಲ್ಲೂಕಿನ ತಹಶೀಲ್ದಾರಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

Previous Post Next Post