ಬಸವರಾಜ ಬೊಮ್ಮಾಯಿಯೇ ಮುಂದಿನ ಸಿಎಂ


 

ದಾವಣಗೆರೆ: 2023ರ ವಿಧಾನಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವ

ವಹಿಸುತ್ತಾರೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದು, ಚುನಾವಣೆ

ನೇತೃತ್ವ ಅಂದರೆ ಅದರರ್ಥ ಮುಂದಿನ ಮುಖ್ಯಮಂತ್ರಿ ಎಂಬುದೇ ಆಗಿದೆ ಎಂದು ಸಿಎಂ ರಾಜಕೀಯ

ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಮಂಗಳವಾರ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ

ಚುನಾವಣೆಯಲ್ಲಿ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ನೇತೃತ್ವ ವಹಿಸಿ, ನಂತರ

ಮುಖ್ಯಮಂತ್ರಿ ಆದರು. ಬರಲಿರುವ ಚುನಾವಣೆಯ ನೇತೃತ್ವ ವಹಿಸಿದವರೇ ಮುಂದಿನ

ಮುಖ್ಯಮಂತ್ರಿಯಾಗುತ್ತಾರೆ. ಕೇಂದ್ರ ಗೃಹ ಸಚಿವರು ಹೇಳಿದ ಮಾತಿನ ಅರ್ಥವೂ ಇದೇ ಆಗಿದೆ.

ಮುಂದಿನ ಸಿಎಂ ಸಹ ಬೊಮ್ಮಾಯಿ ಆಗಿರುತ್ತಾರೆ ಅಂತಲೇ ಅರ್ಥ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಯಾರೂ ಸೈಡ್ ಲೈನ್ ಮಾಡಿಲ್ಲ, ಸೈಡ್ ಲೈನ್

ಮಾಡುವ ಪ್ರಶ್ನೆಯೂ ಇಲ್ಲ. ಸಿಂಧಗಿ, ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ

ಪರ ನಮ್ಮ ನಾಯಕರಾದ ಯಡಿಯೂರಪ್ಪ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಪಕ್ಷವಾಗಲೀ, ಪಕ್ಷದ

ವರಿಷ್ಟರಾಗಲೀ ಬಿ.ಎಸ್.ಯಡಿಯೂರಪ್ಪನವರಿಗೆ ಸೈಡ್ ಲೈನ್ ಮಾಡಿಲ್ಲ ಎಂದು ಅವರು

ತಿಳಿಸಿದರು.


Post a Comment

Previous Post Next Post