ಮೈಸೂರು ಮೃಗಾಲಯದ ದಿನಗೂಲಿ ನೌಕರರಿಗೆಶ್ರೀಮತಿ ಸುಧಾಮೂರ್ತಿ ತಲಾ ರೂ. ಹತ್ತು ಸಾವಿರ ಕೊಡುಗೆ

ಮೈಸೂರು ಮೃಗಾಲಯದ ದಿನಗೂಲಿ ನೌಕರರಿಗೆ
ಶ್ರೀಮತಿ ಸುಧಾಮೂರ್ತಿ ತಲಾ ರೂ. ಹತ್ತು ಸಾವಿರ ಕೊಡುಗೆ

ಬೆಂಗಳೂರು, ಅಕ್ಟೋಬರ್ 09, (ಕರ್ನಾಟಕ ವಾರ್ತೆ):
ಇನ್ಫೋಸಿಸ್ ಫೌಂಡೇಷನ್‍ನ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ ಅವರು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 239 ದಿನಗೂಲಿ ನೌಕರರಿಗೆ ಕೋವಿಡ್-19ರ ಹಿನ್ನೆಲೆಯಲ್ಲಿ ಆರ್ಥಿಕ ನಿರ್ವಹಣೆಗಾಗಿ ತಲಾ  ರೂ. 10.00 ಸಾವಿರ ರೂಪಾಯಿಗಳ ಕೊಡುಗೆಯನ್ನು ನೀಡಿರುತ್ತಾರೆ. ಇನ್ಫೋಸಿಸ್ ಫೌಂಡೇಷನ್‍ನ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ ಅವರನ್ನು ಮೈಸೂರು ಮೃಗಾಲಯವು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

Previous Post Next Post