ಪತ್ರಿಕಾ ಹೇಳಿಕೆ ; ಕೆಪಿಸಿಸಿ ಮಾಧ್ಯಮ ಸಂಯೋಜಕರಾದ ಎಂ ಎಸ್ ಸಲೀಂ

 ಪತ್ರಿಕಾ ಹೇಳಿಕೆ 

ಕೆಪಿಸಿಸಿ ಮಾಧ್ಯಮ  ಸಂಯೋಜಕರಾದ ಎಂ ಎಸ್ ಸಲೀಂ ಆದ ನಾನು 

 ಮಾಧ್ಯಮ ಮಿತ್ರರಿಗೆ ಸ್ಪಷ್ಟಪಡಿಸುವುದೆನೆಂದರೆ  ದಿನಾಂಕ - 12-10-2021  ರಂದು ಕೆಪಿಸಿಸಿ ಕಛೇರಿ ಯಲ್ಲಿ ನಡೆದ ಸುದ್ದಿಘೋಷ್ಠಿ ಸಂದರ್ಭದಲ್ಲಿ ಮಾಜಿ ಸಂಸರಾದ ಉಗ್ರಪ್ಪ ರೊಂದಿಗೆ ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಲು  ಇವರ ಆಪ್ತರ ಮೇಲೆ  Ed ಹಾಗೂ IT‌ ಮುಖಾಂತರ ಗೂಬೆ ಕೂರಿಸುವ ಪ್ರಯತ್ನ ದ ಬಗ್ಗೆ ಚರ್ಚೆ ನಡೆಸುತ್ತಿದೆವು , ಈ ವಿಷಯವನ್ನು ಮುಂದುವರೆಸಿ ಪತ್ರಿಕಾ ಘೋಷ್ಠಿಯ ಸಂದರ್ಭದಲ್ಲಿ ನೀರಾವರಿ ಹಗರಣದ ಬಗ್ಗೆ ಯಡಿಯೂರಪ್ಪ ರವರ ಪುತ್ರ ವಿಜಯೇಂದ್ರ ರ  ಆಪ್ತನಾಗಿದ್ದ ಉಮೇಶ್  ಇವರ ಮೇಲೆ ನೇರ ಆರೋಪ ಕೇಳಿಬರುತ್ತಿದ್ದೆ , ಈ ವಿಷಯವನ್ನು ರಾಜಕೀಯವಾಗಿ ದುರ್ಬಬಳಕೆ ಮಾಡಿಕೊಳ್ಳುಲು ಕುಮಾರಸ್ವಾಮಿ ರವರು ಹಾಗೂ ಇತರೆ ನಾಯಕರು ಕಾಂಗ್ರೆಸ್‌ ನಾಯಕರ ಮೇಲೆ ಆರೋಪ ಹೊರೆಸಿತ್ತಿರುವ ವಿಚಾರವನ್ನು ಶಿವಮೊಗ್ಗದಲ್ಲಿಯು ಕೂಡ ಚರ್ಚೆ ನಡೆಸುತ್ತಿಸುತ್ತಿದ್ದರು ಈ ವಿಷಯ ನಮ್ಮ ಗಮನಕ್ಕು ಬಂದಿದ್ದು   ಏಕೆಂದರೆ ನಾನೂ ಮೂಲತಃ ಶಿವಮೊಗ್ಗದ ಮೂಲದವನಾಗಿದ್ದರಿಂದ ನನ್ನ ಬೆಜೆಪಿಯ ಕೆಲ ಸ್ನೇಹಿತರು ಈ ಬಗ್ಗೆ ತಿಳಿಸಿದ್ದರು , ಈ ವಿಷಯವನ್ನು ಉಗ್ರಪ್ಪರ ಬಳಿ ಚರ್ಚೆ ನಡೆಸುತ್ತಿದ್ದೆ , ಯಡಿಯೂರಪ್ಪನವರ ಅಪ್ತ ವಲಯದಲ್ಲಿರುವ ವ್ಯಕ್ತಿಗಳು 700 ಕೋಟಿಗು ಹೆಚ್ಚು Scam ಮಾಡಿದ್ದಾರೆ ಎಂದೂ ಚರ್ಚೆ ಮಾಡುತ್ತಿದ್ದೋ ಆದರೆ ಇದನ್ನು ಮರೆಮಾಚಿದ್ದಾರೆ ,

 ಡಿ.ಕೆ ಶಿವಕುಮಾರ್ ರವರು ನಮ್ಮಂತಹ ಅನೇಕ ಪಕ್ಷದ ಕಾರ್ಯಕರ್ತರಿಗೆ ರಾಜಕೀಯವಾಗಿ ಅವಕಾಶಗಳನ್ನು ನೀಡಿದ್ದಾರೆ , ಪಕ್ಷವನ್ನು ತಾಯಿಯಂತೆ ಕಾಣುವ ನಾನು , ಕಾಂಗ್ರೆಸ್ ಪಕ್ಷ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ಬದ್ದನಾಗಿರುತ್ತೇನೆ , ನನ್ನ ಪ್ರಾಣ ಇರುವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ , ಈ ವಿಷಯವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡು ಹೇಸಿಗೆ ರಾಜಕಾರಣ ಮಾಡುತ್ತಿರುವ ಬಿಜೆಪಿಯ ಚೀಟಿಂಗ್ ರವರು ಕುಡಿತದ ಮತ್ತಿನಲ್ಲಿ ಏನೇನೋ ಪ್ರಸ್ತಾಪಿಸುತ್ತಿದ್ದಾರೆ, ಬಿಜೆಪಿಯ ಹಲವು ನಾಯಕರ ವರ್ತನೆಯನ್ನು ಖಂಡಿಸುತ್ತೇವೆ , ಗೃಹ ಸಚಿವ ಹೇಳುರುವ ಹೇಳಿಕೆ ಹಾಸ್ಯಸ್ಪದ , ಮೊದಲು ಬೆಜೆಪಿ ನಾಯಕರ ಮೇಲೆರುವ ದೂರಿನ ಮೇಲೆ ಮೊದಲು ತನಿಖೆ ನಡೆಸಿದರೆ ಎಷ್ಟು ಜನ ಜೈಲು ಪಾಲಾಗುತ್ತಾರೆ  ಮೊದಲು ನೋಡಿಕೊಳ್ಳಲಿ  , ಸಿಟಿ ರವಿಯೊಬ್ಬ ನಿರುದ್ಯೋಗಿ ಹಾಗೂ ಕೊತ್ವಲನ ರಕ್ತಸಂಬಂಧಿ ಎಂಬಂತೆ ಕಾಣುತ್ತಿದೆ ,ಮೊದಲು ಇದನ್ನು ಪರೀಕ್ಷಿಸಿಕೋ , ಡಿಕೆ ಶಿವಕುಮಾರ ರವರು ನಮ್ಮಂತಹ ಎಷ್ಟೋ ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ನೀಡಿದ್ದಾರೆ , ಇವರ ಬಗ್ಗೆ ಯಾವುದೇ ತರಹ ಕೆಟ್ಟ ಹೇಳಿಕೆಗಳನ್ನು ನೀಡಿಲ್ಲ , ಆದಾಗ್ಯೂ ಮಾಧ್ಯಮಗಳ ಬಿತ್ತರವಾಗಿರುವ ಮಾಹಿತಿಯಿಂದ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮುಜುಗರ ಅಥವಾ ಮನಸ್ಸಿಗೆ ನೋವುಂಟ ಆಗಿದ್ದರೆ ಮಾಡಿದ್ದರೆ ನಾನೂ ಅತ್ಯಂತ ವಿನಯದಿಂದ ಕ್ಷಮೆಯಾಚಿಸುತ್ತೇನೆ ಹಾಗೂ ನನ್ನ ಜೀವನದ ಕೊನೆಕ್ಷಣದವರೆಗೂ ಕಾಂಗ್ರೆಸ್ ನ ಪ್ರಾಮಾಣಿಕ ಕಾರ್ಯಕರ್ತನಾಗಿರುತ್ತೇನೆ  ಹಾಗೂ ಈ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಅಧ್ಯಕ್ಷರಿಗೆ ಕೃತಜ್ಞನಾಗಿರುತ್ತೇನೆ.

Post a Comment

Previous Post Next Post