ರಾಜ್ಯದಲ್ಲಿ ಬಿಜೆಪಿ ಸುನಾಮಿ:ಬೊಮ್ಮಾಯಿ

 

ರಾಜ್ಯದಲ್ಲಿ ಬಿಜೆಪಿ
ಸುನಾಮಿ:ಬೊಮ್ಮಾಯಿ

ಹಾನಗಲ್: ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಇದರ ಪರಿಣಾಮವಾಗಿ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಹಾನಗಲ್‌ನಲ್ಲಿ ಭಜಂತ್ರಿ ಸಮುದಾಯದ ಮುಖಂಡರು ಹಾಗೂ ಜನರನ್ನು ಉದ್ದೇಶಿಸಿ ಮಾಡಿದ ಚುನಾವಣಾ ಪ್ರಚಾರ ಭಾಷಣದ ಸಂದರ್ಭದಲ್ಲಿ ಈ ವಿಶ್ವಾಸ ವ್ಯಕ್ತಪಡಿಸಿದರು.

 ಪ್ರತಿ ಊರಿನಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿಯೂ ನೆಲಕಚ್ಚಿದ್ದು, ಹಾನಗಲ್‌ನಲ್ಲಿಯೂ ಅವರನ್ನು ಮನೆಗೆ ಕಳುಹಿಸಿದರೆ, ಅವರು ಖಾಯಂ ಆಗಿ ಮನೆಯಲ್ಲಿ ಇರುತ್ತಾರೆ ಎಂದರು.

ಸುಳ್ಳು ಹೇಳುವವರಿಗೆ ಮನ್ನಣೆ ಕೊಡಬೇಡಿ ಎಂದು ಕರೆ ನೀಡಿದ ಮುಖ್ಯಮಂತ್ರಿಗಳು, ಎಲ್ಲಾ ಸಮುದಾಯಗಳ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇಷ್ಟು ದಿ ಕಾಂಗ್ರೆಸ್ ಜನರನ್ನು ಮತಬ್ಯಾಂಕ್ ಎಂದು ತಿಳಿದುಕೊಂಡಿತ್ತು. ಅಕಾರ ಪಡೆದವರು ಜನರನ್ನು ಮರೆತು ಅಕಾರದಲ್ಲಿ ಮೆರೆಯುತ್ತಿದ್ದರು. ಈಗ ನೀವು ಜಾಗೃತರಾಗಿರುವುದರಿಂದ ನಿಮ್ಮನ್ನು ವಂಚಿಸಲು ಯಾರಿಗೂ ಸಾಧ್ಯವಿಲ್ಲ ಎಂದರು. 

ಕಾಂಗ್ರಸ್ ಹತಾಶಗೊಂಡಿದೆ.  ಅದರ ನಾಯಕರು ಚುನಾವಣೆ ಸಂದರ್ಭದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದಾರಿ ತಪ್ಪಿಸುವ, ಸಮಾಜಗಳಿಗೆ ಅನ್ಯಾಯ ಮಾಡುವ ಕೆಲಸವನ್ನು ಮಾಡಿದ್ದಾರೆ. ಇಂದಿಗೂ ಅಲ್ಲಲ್ಲಿ ಅಸಮಾನತೆಯ ಕೂಗು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಮೊದಲಿನಿಂದಲೂ ಸಮಾನತೆ ತರುವ ಕೆಲಸ ಮಾಡಿದ್ದರೆ ಈ ಕೂಗು ಇರುತ್ತಿರಲಿಲ್ಲ ಎಂದರು.

ನನ್ನ ಗುರಿ ನನ್ನ ಜರ ಏಳ್ಗೆ, ನನ್ನನ್ನು ನಂಬಿದವರಿಗೆ ನ್ಯಾಯ ಕೊಡುವುದು ನನ್ನ ಧರ್ಮ. ಧ್ವನಿ ಇಲ್ಲದವರಿಗೆ ಧ್ವನಿ ಕೊಡುವ ಕೆಲಸವನ್ನು ಮಾಡುವುದಾಗಿ ಅಭಯ ನೀಡಿದರು.

ನಮ್ಮದು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ, ಅವರ ಮಾತುಗಳನ್ನು ಕೇಳುವ ಸರ್ಕಾರ.  ಜನರಿಗೆ ಅಕಾರ ಮತ್ತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆಯಿತ್ತರು. ಯುವಕರಿಗೆ ಉದ್ಯೋಗ, ಸ್ತ್ರೀ ಶಕ್ತಿಸಂಘಗಳಿಗೆ  ಆರ್ಥಿಕ ಬಲ ಕೊಡುವ ಕೆಲಸವನ್ನು ಸರ್ಕಾರ ಮಾಡಲು ಜಿಲ್ಲಾ ಮಟ್ಟದ ಅಕಾರಿಯೊಬ್ಬರುನ್ನು ಶೀಘ್ರದಲ್ಲಿಯೇ ನೇಮಿಸುವುದಾಗಿ ತಿಳಿಸಿದರು.

 

 

 

Post a Comment

Previous Post Next Post