21-10-2021
ಪ್ರಕಟಣೆಯ ಕೃಪೆಗಾಗಿ
ಕೇರಳ ನೆರೆ ಸಂತ್ರಸ್ತರಿಗೆ ಬಿಜೆಪಿ ಸಹಾಯಹಸ್ತ
ಬೆಂಗಳೂರು: ಕೇರಳದ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡಲು ಮುಂದಾದ ರಾಜ್ಯ ಬಿಜೆಪಿ. ಸಂತ್ರಸ್ತರಿಗೆ ನೆರವಾಗುವ ದಿನಬಳಕೆ ವಸ್ತುಗಳನ್ನು ಹೊಂದಿದ ನಾಲ್ಕು ವಾಹನಗಳಿಗೆ ಇಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಾ ಅವರು ಹಸಿರುನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಶಾಸಕರು ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಸತೀಶ್ ರೆಡ್ಡಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ. ಮಂಜುನಾಥ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾದ ಲೋಕೇಶ್ ಅಂಬೆಕಲ್ಲು, ಪಂಚಾಯತ್ ರಾಜ್ ನಗರ ಪ್ರಕೋಷ್ಠ ಸಂಚಾಲಕರಾದ ಎ.ಎಲ್. ಶಿವಕುಮಾರ್, ಮಾಜಿ ಬಿಬಿಎಂಪಿ ಸದಸ್ಯರಾದ ಮುನಿಂದ್ರ ಕುಮಾರ್, ಪ್ರಮುಖರಾದ ಸೀನು ಜೋಸೆಫ್, ಬೆಂಗಳೂರು ಕೇಂದ್ರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯೇಂದ್ರ, ಮತ್ತು ಬೆಂಗಳೂರು ಉತ್ತರ ಜಿಲ್ಲೆ ಯುವ ಮೋರ್ಚಾ ಅಧ್ಯಕ್ಷರಾದ ಪ್ರಶಾಂತ್ ಹಾಗೂ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಹೊದಿಕೆಗಳು, ನೀರಿನ ಬಾಟಲಿಗಳು, ಬಿಸ್ಕಿಟ್ ಪೊಟ್ಟಣಗಳು, ಒಳ ಉಡುಪುಗಳು, ಔಷಧಿಗಳು ಸೇರಿದಂತೆ 20ಕ್ಕೂ ಹೆಚ್ಚು ದಿನಬಳಕೆಯ ವಸ್ತುಗಳನ್ನು ಕಳುಹಿಸಿ ಕೊಡಲಾಯಿತು.
Post a Comment