ಪ್ರಾಣಿಗಳ ದತ್ತು ಸ್ವೀಕಾರ
ಬೆಂಗಳೂರು, ಅಕ್ಟೋಬರ್ 19 ;
ಮೈಸೂರು ಮೃಗಾಲಯದ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ, ಮೈಸೂರು ಮೃಗಾಲಯದ ಪ್ರಾಣಿ ಪಕ್ಷಿಗಳಾದ, ಮಲಬಾರ್ ದೈತ್ಯ ಅಳಿನ್ನು ಬೆಂಗಳೂರಿನ ವೆಂಕಟೇಶ್ ಪಿ.ಎಸ್., ಹುಲ್ಲಕ್ ಗಿಬ್ಬನ್ನ್ನು ಬೆಂಗಳೂರಿನ ನಟಿಯಾದ ಅನುಸೂಯ ಕೋಮಲ್ ಕುಮಾರ್, ಲವ್ ಬರ್ಡ್ನ್ನು ಮಂಡ್ಯದ ಕೆ.ಟಿ. ಪದ್ಮ ರಾಮಶೆಟ್ಟಿ, ಬ್ರೌನ್ ಕಪ್ಮ್ಪಚಿನ್ ಕೋತಿಯನ್ನು ಮೈಸೂರಿನ ಲಿಲಾ ಮೂರ್ತಿ ಹಾಗೂ ಮೈಸೂರು, ಬೆಂಗಳೂರು ಹಾಗೂ ಇತರೆ ಜಿಲ್ಲೆಗಳ ದಾನಿಗಳು ಒಟ್ಟು 25 ಪ್ರಾಣಿ ಪಕ್ಷಿಗಳನ್ನು ಮಂದಿ ಸೇರಿ “ZAK App” ಮೂಲಕ ದತ್ತು ಸ್ವೀಕಾರ ಮಾಡಿರುವುದಕ್ಕೆ ಮೈಸೂರು ಮೃಗಾಲಯವು ಹರ್ಷಿಸುತ್ತದೆ. ಈ ಮಹತ್ವದ ಕೊಡುಗೆಯ ಮೂಲಕ ವನ್ಯಪ್ರಾಣಿ ಸಂರಕ್ಷಣೆಯ ಸತ್ಕಾರ್ಯದಲ್ಲಿ ಭಾಗವಹಿಸಿರುವುದಕ್ಕಾಗಿ ಅವರುಗಳನ್ನು ಮೈಸೂರು ಮೃಗಾಲಯವು ಅಭಿನಂದಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Post a Comment