ಏಪ್ರಿಲ್ 16, 2022
,
1:56PM
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಪತ್ನಿ ಸಮೇತ ಇಂದು ಬೆಳಗ್ಗೆ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಭಗವಾನ್ ಶಿವನನ್ನು ಪೂಜಿಸಿದ ನಂತರ, ಅವರು ಹೊಸದಾಗಿ ನಿರ್ಮಿಸಲಾದ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಅನ್ನು ಸಹ ನೋಡಿದರು. ಭೋಲೆನಾಥರು ನಮ್ಮನ್ನು ಸದಾಚಾರ, ಶಾಂತಿ ಮತ್ತು ಸಮೃದ್ಧಿಯ ಹಾದಿಗೆ ಕೊಂಡೊಯ್ಯಲಿ ಎಂದು ನಾಯ್ಡು ತಮ್ಮ ಟ್ವೀಟ್ ಸಂದೇಶದಲ್ಲಿ ಹೇಳಿದ್ದಾರೆ.
ಅವರು ಕಾಶಿ ಕಾ ಕೊತ್ವಾಲ್ ಎಂದು ಪರಿಗಣಿಸಲಾದ ಕಾಲ ಭೈರವನ ದೈವಿಕ ಆಶೀರ್ವಾದವನ್ನು ಪಡೆದರು. ನಂತರ ಉಪರಾಷ್ಟ್ರಪತಿ ನಾಯ್ಡು ಅವರು ತಮ್ಮ ಪತ್ನಿಯೊಂದಿಗೆ ಚಂದೌಲಿ ಜಿಲ್ಲೆಯ ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮಾರಕಕ್ಕೆ ಭೇಟಿ ನೀಡಿ ಮಹಾನ್ ನಾಯಕನಿಗೆ ಪುಷ್ಪ ನಮನ ಸಲ್ಲಿಸಿದರು.
Post a Comment