ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಪ್ರಯಾಣಿಸುತ್ತಿದ್ದ ಕಾರು ಪಲ್ಟಿ, ಕೈಗೆ ಪೆಟ್ಟು

ತುಮಕೂರು: ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು  ಪ್ರಯಾಣಿಸುತ್ತಿದ್ದ ಕಾರು  ಮಂಗಳವಾರ ರಾತ್ರಿ 10.45ರ ಸಮಯದಲ್ಲಿ  ಪಲ್ಟಿಯಾಗಿ ದ್ದು, ಜಯಚಂದ್ರ ಅವರ ಕೈಗೆ ಪೆಟ್ಟಾಗಿ ಗಾಯಗೊಂಡಿದ್ದಾರೆ.

ಮಂಗಳವಾರ ರಾತ್ರಿ ಫಾರ್ಚುನರ್ ಕಾರಿನಲ್ಲಿ  ಬೆಂಗಳೂರಿನತ್ತ ಟಿ.ಬಿ.ಜಯಚಂದ್ರ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತುಮಕೂರು ತಾಲೂಕಿನ ಸಿಬಿ ಕ್ರಾಸ್​ ಬಳಿ ಮಳೆ ಯಿಂದ ರಸ್ತೆ ಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ಪಲ್ಟಿಯಾಗಿದೆ. ಪ್ರಾಣಾಪಾಯದಿಂದ ಜಯಚಂದ್ರ, ಕಾರು ಚಾಲಕ ಮತ್ತು ಗನ್ ಮ್ಯಾನ್ ಪಾರಾಗಿದ್ದಾರೆ. ಮಾಜಿ ಸಚಿವರಿಗೆ ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Post a Comment

Previous Post Next Post