*ನ್ಯಾಯಾಂಗ ಮೂಲಸೌಕರ್ಯ ಹೆಚ್ಚಿಸಲು ಪ್ರಾಧಿಕಾರ ರಚನೆಗೆ ಚಿಂತನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಮುಖ್ಯಮಂತ್ರಿಗಳ ಮತ್ತು  ಸಿಜೆಗಳ ಸಮ್ಮೇಳನ:
*ನ್ಯಾಯಾಂಗ ಮೂಲಸೌಕರ್ಯ ಹೆಚ್ಚಿಸಲು ಪ್ರಾಧಿಕಾರ ರಚನೆಗೆ  ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ನವದೆಹಲಿ, ಏಪ್ರಿಲ್ 30: ನ್ಯಾಯಾಂಗ ಮೂಲಸೌಕರ್ಯ ಹೆಚ್ಚಿಸಲು ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿಗಳ ಮತ್ತು  ಸಿಜೆಗಳ ಸಮ್ಮೇಳನದಲ್ಲಿ  ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನವದೆಹಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಶೇಷವಾಗಿ  ನ್ಯಾಯಾಂಗ ಮೂಲಸೌಕರ್ಯ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾರೆ ಸೇರಿ ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡಬೇಕೆನ್ನುವುದು ಸರ್ವೋಚ್ಛ ನ್ಯಾಯಾಲಯದ ಬಯಕೆ. ಅದರಂತೆ ರಾಜ್ಯದಲ್ಲಿ ಒಂದು  ಪ್ರಾಧಿಕಾರವನ್ನು   ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಚಿಸುವಂತೆ ಸೂಚಿಸಲಾಯಿತು. ಆ  ಸಮಿತಿಯಲ್ಲಿ  ಮುಖ್ಯಮಂತ್ರಿಗಳು,  ಕಾನೂನು ಸಚಿವರು, ಹಿರಿಯ ಅಧಿಕಾರಗಳಿರಬೇಕು. ಅವರ ಮೂಲಕ ಮೂಲಭೂತಸೌಕರ್ಯಗಳನ್ನು ಒದಗಿಸಬೇಕು ಹಾಗೂ ಮೇಲ್ವಿಚಾರಣೆಯನ್ನೂ ಕೈಗೊಳ್ಳಬೇಕು ಎಂದು  ತಿಳಿಸಲಾಯಿತು ಎಂದು ಅವತು ಹೇಳಿದರು. 

*ಮಂಜೂರಾಗಿರುವ ನ್ಯಾಯಮೂರ್ತಿಗಳ ಹುದ್ದೆಗಳ ಭರ್ತಿಗೆ ಸೂಚನೆ:*
ಅತಿ ಶೀಘ್ರದಲ್ಲಿ ಎಲ್ಲರಿಗೂ ನ್ಯಾಯ ಸಿಗಲು ನ್ಯಾಯದಾನ ವ್ಯವಸ್ಥೆಯನ್ನು ಬಲಪಡಿಸಬೇಕು.  ಕೇವಲ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಅಷ್ಟೇ ಅಲ್ಲ, ಆರ್ಥಿಕವಾಗಿ ದೇಶವನ್ನು ಬಲಪಡಿಸುವ ಬಗ್ಗೆಯೂ ಚರ್ಚೆಯಾಯಿತು. ನ್ಯಾಯಮೂರ್ತಿಗಳ ಹುದ್ದೆಗಳು  ಎಲ್ಲೆಲ್ಲಿ ಮಂಜೂರಾಗಿದೆಯೋ ಅವುಗಳನ್ನು ಕೂಡಲೇ ಭರ್ತಿ ಮಾಡಲು ಸೂಚಿಸಲಾಗಿದೆ ಎಂದರು.

Post a Comment

Previous Post Next Post