ಇನ್ಮುಂದೆ ಮೌಖಿಕ ಆದೇಶದ ಮೇಲೆ ಯಾರೂ ಕಾಮಗಾರಿ ಮಾಡುವಂತಿಲ್ಲ , CM

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯಿಂದ ಹೆಚ್ಚಿತ್ತಿರುವ ರಾಜ್ಯ ಸರ್ಕಾರ, ಇನ್ಮುಂದೆ ಮೌಖಿಕ ಆದೇಶದ ಮೇಲೆ ಯಾರೂ ಕಾಮಗಾರಿ ಮಾಡುವಂತಿಲ್ಲ ಎಂದು ತಿಳಿಸಿದೆ.

ಶಿವಮೊಗ್ಗದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, 'ಲೋಕಲ್ ಬಾಂಡೀಸ್ʼನಲ್ಲಿ, ಪಂಚಾಯತ್ ರಾಜ್ ಬಾಂಡೀಸ್ʼನಲ್ಲೂ ಮೌಖಿಕ ಆದೇಶದ ಮೇಲೆ ಕೆಲಸಗಳು ನಡೆಯುತ್ತವೆ.ಆದ್ರೆ, ನಾನು ಈಗಾಗ್ಲೇ ಪ್ರತಿ ಡಿಪಾರ್ಟ್ಮೆಂಟ್ʼಗೆ ಸೂಚನೆ ನೀಡಿದ್ದೇನೆ. ಯಾವುದೇ ಮೌಖಿಕ ಆದೇಶದ ಮೇಲೆ ಕೆಲಸದ ಕಾಮಗಾರಿ ಮಾಡಬಾರದು. ಒಂದ್ವೇಳೆ ಮಾಡಿದ್ರೆ, ಆ ಪ್ರಕ್ರಿಯೆಗೆ ಇಂಜಿನಿಯರ್ ಜವಬ್ದಾರಿಯಾಗುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಪಿಡಿಒ ಮತ್ತು ಇಓ ಜವವ್ದಾರಿಯಾಗುತ್ತಾರೆ. ಇನ್ಮುಂದೆ ಸ್ಪಷ್ಟವಾದ ರೈಟಿಂಗ್ʼನಲ್ಲಿಯೇ ಆದೇಶ ನೀಡಬೇಕಾಗುತ್ತೆ. ಕಾಮಗಾರಿ ಟೆಂಡರ್ ಸಂಬಂಧ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸುತ್ತಿದ್ದಾರೆ. ಇನ್ನೊಂದು ವಾರದಲ್ಲೇ ಈ ಆದೇಶ ಕೂಡ ಹೊರ ಬೀಳಲಿದೆ' ಎಂದರು.

Post a Comment

Previous Post Next Post