ಭಾರತದ ಹಿತಾಸಕ್ತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ರಷ್ಯಾ ಎಂದಿಗೂ ಏನನ್ನೂ ಮಾಡಿಲ್ಲ: ಇಎಎಂ ಜೈಶಂಕರ್
ಪ್ರಧಾನಿ ನರೇಂದ್ರ ಮೋದಿಯವರ ನಾಳೆ ರಷ್ಯಾ ಭೇಟಿಗೆ ಮುನ್ನ, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ಸ್ವಾತಂತ್ರ್ಯದ ನಂತರ, ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಯಾವುದೇ ನಕಾರಾತ್ಮಕತೆಯನ್ನು ರಷ್ಯಾ ಎಂದಿಗೂ ಮಾಡಿಲ್ಲ ಎಂದು ಒತ್ತಿ ಹೇಳಿದರು. ನವದೆಹಲಿಯಲ್ಲಿ ಖಾಸಗಿ ಮಾಧ್ಯಮ ಉದ್ಯಮವೊಂದು ಆಯೋಜಿಸಿದ್ದ ವಿಶ್ವ ಶೃಂಗಸಭೆಯಲ್ಲಿ ಇಂದು ಡಾ.ಜೈಶಂಕರ್ ಈ ವಿಷಯ ತಿಳಿಸಿದರು.
ಇತರ ದೇಶಗಳೊಂದಿಗಿನ ರಷ್ಯಾದ ಸಂಬಂಧಗಳ ಕುರಿತು ಮಾತನಾಡಿದ ಡಾ ಜೈಶಂಕರ್, ಪಾಶ್ಚಿಮಾತ್ಯ ದೇಶಗಳೊಂದಿಗಿನ ಅವರ ಸಂಬಂಧವು ಮುರಿದುಹೋಗಿದೆ, ಅವರು ಏಷ್ಯಾದ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಭಾರತವು ದೊಡ್ಡ ಸಂಪನ್ಮೂಲ ಗ್ರಾಹಕರಾಗಿರುವಾಗ ಅಭಿವೃದ್ಧಿಯ ಈ ಹಂತದಲ್ಲಿ ಪ್ರಮುಖ ನೈಸರ್ಗಿಕ ಸಂಪನ್ಮೂಲ ಶಕ್ತಿಯಾಗಿರುವ ರಷ್ಯಾವು ಭಾರತದೊಂದಿಗೆ ಪೂರಕತೆಯನ್ನು ಹೊಂದಿದೆ ಎಂದು ಅವರು ಹೇಳಿದರು.
Post a Comment