ಪಿಯುಸಿ ಫಲಿತಾಂಶದಲ್ಲಿ ಹಳ್ಳಿಗಾಡಿನ ಸಾಮಾನ್ಯ ಕುಟುಂಬದ ಎಲ್ ಆರ್ ಸಂಜನಾಬಾಯಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ

#Karnataka #PUCResults

ಪಿಯುಸಿ ಫಲಿತಾಂಶದಲ್ಲಿ ಹಳ್ಳಿಗಾಡಿನ ಸಾಮಾನ್ಯ ಕುಟುಂಬದ ಎಲ್ ಆರ್ ಸಂಜನಾಬಾಯಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಗಳಿಸಿ ಅಭಿನಂದನೆಗೆ ಪಾತ್ರಳಾಗಿದ್ದಾಳೆ. ಹೊಸಪೇಟೆ ತಾಲೂಕಿನ ಗುಂಡ ಸ್ಟೇಷನ್ ತಾಂಡದ ಲಾರಿ ಡ್ರೈವರ್ ರಾಮಾನಾಯ್ಕರವರ ಮಗಳಾದ ಸಂಜನಾಬಾಯಿ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿನಿ. 

600ಕ್ಕೆ 597 ಅಂಕ ಗಳಿಸಿದ ಶೇಯಸ್ಸು ಈ ವಿದ್ಯಾರ್ಥಿನಿಯದು. 

ಕನ್ನಡ , Political Science, Education ವಿಷಯಗಳಲ್ಲಿ 100 ಅಂಕ, ದ್ವಿತೀಯ ಭಾಷೆಯಾಗಿ ಸಂಸ್ಕೃತ ಓದಿ ಪೂರ್ತಿ 100 ಅಂಕ ತನ್ನದಾಗಿಸಿಕೊಂಡಿದ್ದಾಳೆ. ಐಚ್ಛಿಕ ಕನ್ನಡದಲ್ಲಿ 99, ಇತಿಹಾಸದಲ್ಲಿ 98 ಅಂಕ ಪಡೆದಿದ್ದಾರೆ.  

ಅಭಿನಂದನೆಗಳು 💐

Post a Comment

Previous Post Next Post